ರಾಮಾಯಣದ ಸೀತೆಯು ವನವಾಸಾದಲ್ಲೂ ಏಕೆ ಸಂತೋಷವಾಗಿದ್ದಳು


ರಾಮಾಯಣದ ಸೀತೆಯು ವನವಾಸಾದಲ್ಲೂ ಏಕೆ ಸಂತೋಷವಾಗಿದ್ದಳು

ಆಧುನಿಕ ರಂಗಭೂಮಿಗಾಗಿ ಪೌರಾಣಿಕ ಪಾತ್ರಗಳಾದ ದ್ರೌಪದಿಯಿಂದ ಅಹಲ್ಯೆ ಮತ್ತು ರಾಮನಿಂದ ರಾವಣನ ವರೆಗೆ ಪಾತ್ರಗಳನ್ನು ನೈಜ ದೃಷ್ಟಿಯಿಂದ ವ್ಯಾಖ್ಯಾನಿಸಲಾಗಿದೆ.

ಶ್ರೇಷ್ಠ ತತ್ತ್ವಜ್ಞಾನಿ ತಂದೆಗೆ  ಸಾಹಿತ್ಯ ಹಾಗೂ ಆಧ್ಯಾತ್ಮಿಕಗಳಲ್ಲಿ ಪರಿಣತಿ ಪಡೆದ ಮಗಳು ವಿವಾಹಾನಂತರ ರಾಜಕಾರಣ ಹಾಗೂ ಒಳಸಂಚಿನಲ್ಲೇ ಬಹುಕಾಲ ಸಮಯವನ್ನು ಕಳೆದ ಮನೆಯೊಂದನ್ನು ಪ್ರವೇಶಿಸಿದರೆ ಹೇಗನಿಸುತ್ತದೆ?

ಇಂತಹ ಸಂದರ್ಭದಲ್ಲಿ ಸ್ವತಂತ್ರ ಜೀವಿಯಾದ ಈ ವಧುವಿಗೆ ಒಮ್ಮೆಲೇ 14 ವರ್ಷ ಕಾಡಿಗೆ ಹೋಗುವ ಸಂದರ್ಭ ಬಂದರೆ ಹೇಗಿರುತ್ತದೆ?

ಅವಳೇ ವಿಧೇಯ ಪತ್ನಿ, ಅಸಹಾಯಕ ಬಂಧಿ ಮತ್ತು ಎರಡು ಮಕ್ಕಳ ಪರಿತ್ಯಕ್ತ ಮಾತೆ ಸೀತೆ. 

ಈಕೆ ಮಿಥಿಲಾ ನಗರದಿಂದ ವಾಲ್ಮೀಕಿಯ ಆಶ್ರಮದವರೆಗೂ ಸ್ವಯಂ ಹುಡುಕಾಟದ ಪ್ರಯಾಣವನ್ನು ಸ್ವಯಿಚ್ಛೆಯಿಂದ ಮಾಡಿದಾಕೆ. ಆ ಸಮಯದಲ್ಲಿ ಅಯೋಧ್ಯಾ ನಗರವು ಗುಂಪುಗಾರಿಕೆ, ಗೃಹಸಂಬಂಧೀ ರಾಜಕೀಯದ ಕತ್ತಲಿನಲ್ಲಿ ಆವರಿಸಿತ್ತು. ಕೆಲವರಿಗೆ ರಾಮ, ಲಕ್ಷ್ಮಣ ಹಾಗೂ ಸೀತೆ ಅಯೋಧ್ಯಾನಗರವನ್ನು ತ್ಯಜಿಸುವುದು ದುಃಖಕರವಾದ ಸಂಗತಿಯಾದರೆ, ಸೀತೆಗೆ ಇದು ಸಂತೋಷದ ಸಂಗತಿಯಾಗಿತ್ತು ಎನ್ನುತ್ತಾರೆ ವೀಣಾಪಾಣಿ ಚಾವಲ ರವರು ತಮ್ಮ Voyages of Body & Soul ಪುಸ್ತಕದಲ್ಲಿನ  “The Places and Spaces Inhabited by Sita” ಪ್ರಬಂಧದಲ್ಲಿ.  ಒಂದು ರೀತಿಯಲ್ಲಿ ಸೀತೆಗೆ ಋಷಿ ಮುನಿಗಳು ವಾಸಿಸುತ್ತಿದ್ದ ಅರಣ್ಯವು ಪರ್ಯಾಯ ತಿಳುವಳಿಕೆಯ ಕ್ಷೇತ್ರವಾಗಿತ್ತು.  ಅರಣ್ಯವು ಸೀತೆಗೆ ಅಯೋಧ್ಯೆಗಿಂತ ಹೆಚ್ಚಿನ ಘಟನೆಗಳು ಘಟಿಸಿದ ಸ್ಥಳವೆಂದೇ ಹೇಳಬಹುದು.

ಮತ್ತೊಂದು ಪೌರಾಣಿಕ ಪಾತ್ರವಾದ ಅತ್ಯಂತ ವಿಧೇಯ ಪತ್ನಿಯಾದ ಗಾಂಧಾರಿಯ ಬಗ್ಗೆ ಒಂದು ಕ್ಷಣ ಯೋಚಿಸಿದರೆ ಐರಾವತಿ ಕರ್ವೆ ಯವರ ಮಹಾಭಾರತವನ್ನು ಅಸಾಧಾರಣವಾಗಿ ತಮ್ಮಯುಗಂತಕೃತಿಯಲ್ಲಿ ಅರ್ಥೈಸಿದಂತೆ ಗಾಂಧಾರಿಯ ಕುರುಡುತನವು ಸಂದರ್ಭಕ್ಕೆ ಶರಣಾಗಿದ್ದ ಸಂಕೇತವಲ್ಲ ಬದಲಿಗೆ ಅದು ಬಂಡಾಯದ ಸಂಕೇತವಷ್ಟೇ. ಐರಾವತಿ ಕರ್ವೆಯವರಯುಗಾಂತಕೃತಿಯಿಂದ ಪ್ರಭಾವಿತರಾದ ಶ್ರೀ.ವಾಘ್ ರವರು ಅರ್ಥೈಸಿದಂತೆ ಗಾಂಧಾರಿಯು ಜನಪ್ರಿಯ ಕಲ್ಮನೆಯಂತೆ ಪತಿವ್ರತೆಯಲ್ಲ. ಬದಲಿಗೆ ಅವಳು ತನಗೆ ಬೇಕಾದದ್ದನ್ನು ವೀಕ್ಷಿಸುತ್ತಿದ್ದಳು ಹಾಗೂ ನಾವು ಈಗ ಹೇಗೆ ಚರಿತ್ರೆಯನ್ನು ನಮಗೆ  ಅನುಕೂಲವಾಗುವಂತೆ ಶೋಧಿಸುತ್ತೇವೆಯೋ ಹಾಗೆಯೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ಮೂಲಕ ತನ್ನ ಪ್ರಭಾವವನ್ನು ಬೇರೆಯವರ ಮೇಲೆ ಬೀರುತ್ತಿದ್ದಳು.

ಈಗಿನ ಭಾರತೀಯ ನಾಟ್ಯ ಹಾಗೂ ರಂಗಭೂಮಿಯಲ್ಲಿ ಹಿಂದುಗಳ ದೇವಾನುದೇವತೆಗಳ, ರಾಕ್ಷಸರ ಪಾತ್ರಗಳನ್ನು ವ್ಯಾಪಕವಾಗಿ ಪುನರಚಿಸಲಾಗುತ್ತಿದೆ.  ನಮ್ಮ ಸುತ್ತ ಮುತ್ತಲಿನ ಪ್ರಪಂಚವು ಬದಲಾಗುತ್ತಿದ್ದಂತೆ ಯಾರು ಯಾವುದೇ ವಿಧವಾದ ಪ್ರತಿಗಾಮೀ ಹಾಗೂ ಗೌಣ ನಂಬಿಕೆಗಳನ್ನು ಹೊಂದಿದ್ದರೂ ಕಲೋಪಾಸಕರ ಹೇಳಿಕೆಯಂತೆ ಪುರಾಣಗಳು ಇರುವುದೇ ಅದನ್ನು ಪುನರ್ವ್ಯಾಖ್ಯಾನಿಸಲು ಹಾಗೂ ಕಾಲ ಕಾಲಕ್ಕೆ ಪುನರ್ಚಿತ್ರಿಸಲು. 

ಪುರಾಣ ಕಾವ್ಯಗಳು ಪಿಂಗಾಣಿ ಪದಾರ್ಥಗಳನ್ನು ಮುಟ್ಟಿದರೆ ಒಡೆದು ಹೋಗುವಷ್ಟು ದುರ್ಬಲವಾದದ್ದಲ್ಲ ಎನ್ನುತ್ತಾರೆ ಹೆಸರಾಂತ ನೃತ್ಯಗಾತಿ ಶ್ರೀಮತಿ ಅನಿತಾ ರತ್ನ. ಇವರ ಸುಧಾರಣಾವಾದಿ ಕೃತಿಯಾದ “Million Sitas” ದಲ್ಲಿ ರಾಮಾಯಣದಲ್ಲಿ ಬರುವ ಅನೇಕ ಸ್ತ್ರೀ ಪಾತ್ರಗಳನ್ನು ಅನೇಕ ಮೌಖಿಕ ಸಂಪ್ರದಾಯಗಳ ಬೂದುಗನ್ನಡಿಯ ಮೂಲಕ ವಿಮರ್ಶಿಸಿದ್ದಾರೆ.  ಅವರ ಪ್ರಕಾರ ಪುರಾಣದ ಗ್ರಂಥಗಳನ್ನು ಓದಿದಾಗ ನಮಗೆ ಅನಿಸುವುದು ರಾಮಾಯಣದ ಮಂಥರೆಯು ಅಸಾಮಾನ್ಯ ರಾಜಕೀಯ ವಿಮರ್ಶಕಳು ಹಾಗೂ ಸಂಧಾನಕಾರಿಣಿ. ಹಾಗೆಯೇ ಶೂರ್ಪಣಖಿಯು ಆಧುನಿಕ ಕಾಲದ ಸ್ತ್ರೀ-ಪುರುಷ ಸಂಬಂಧಗಳ ಬಗ್ಗೆ ಗಾಢವಾದ ಭರವಸೆಯುಳ್ಳ ಮಹಿಳೆ ಮತ್ತು ಅಹಲ್ಯೆಯು ವಿಜಯದ ಸಂಕೇತವನ್ನು ಪ್ರತಿನಿಧಿಸುವ ಪತ್ನಿ.  ತಮ್ಮ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಿ ಸಂದರ್ಭಗಳನ್ನು ಮುನ್ನಡೆಸಿಕೊಂಡು ಹೋದರಲ್ಲದೇ ಅನೇಕ ಗಂಭೀರವಾದ ಸಂದರ್ಭಗಳನ್ನು ಪುರುಷ ಪಾತ್ರಧಾರಿಗಳು ನಿಭಾಯಿಸಲು ಸಾಧ್ಯವಾಗದೇ ಇದ್ದರೂ ಸ್ತ್ರೀ ಪಾತ್ರಧಾರಿಗಳು ಯಶಸ್ವಿಯಾಗಿ ನಿಭಾಯಿಸಿದರು.    

ಕನ್ನಡ ರಂಗಭೂಮಿಯ ಹೆಸರಾಂತ ನಿರ್ದೇಶಕ ಮಂಜುನಾಥ್ ಬಡಿಗೇರರು ತಮ್ಮ ಚಿತ್ರಪಠ ನಾಟಕದಲ್ಲಿ ಸೀತಾ-ರಾಮ-ರಾವಣರ ತ್ರಿಕೋನ ಪಾತ್ರಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ - ರಾಮ ರಾವಣರ ಯುದ್ಧದ ನಂತರ ಒಂದು ಸುಂದರ ಸಂಜೆ ಅಯೋಧ್ಯೆಯಲ್ಲಿ ರಾಮ - ಸೀತೆಯರು ಆನಂದದಿಂದಿರುವಾಗ ಶೂರ್ಪಣಕೆಯು ತನ್ನ ಸೋದರನ ಹತ್ಯೆಯ ಸೇಡನ್ನು ತೀರಿಸಿಕೊಳ್ಳಲು ಅಲ್ಲಿಗೆ ಬರುವಳು. ಅವಳು ಸೀತೆಗೆ ತಾನು ಲಂಕೆಯಲ್ಲಿ ಬಂಧನದಲ್ಲಿದ್ದಾಗ ಕಂಡ ರಾವಣನ ವರ್ಣ ಚಿತ್ರವನ್ನು ಬಿಡಿಸಲು ಕೋರಿಕೊಳ್ಳುತ್ತಾಳೆ. ಸೀತೆಯು ವರ್ಣಚಿತ್ರವನ್ನು ಬಿಡಿಸಿದ ಕೊಡಲೇ  ಶೂರ್ಪನಖೆಯ ಮಾಯೆಯ ಪ್ರಭಾವದಿಂದ ಚಿತ್ರಕ್ಕೆ  ಜೀವ ತುಂಬುತ್ತಾಳೆ. ಅದೇ ಸಮಯಕ್ಕೆ ರಾಮನು ಅಲ್ಲಿಗೆ ಬಂದು ಅದನ್ನು ನೋಡಿ  ಕೋಪೋದ್ರಿಕ್ತನಾಗುತ್ತಾನೆ.  ಆ ಸ್ಥಿತಿಯಲ್ಲಿ ರಾಮನು ಆದರ್ಶ ಪುರುಷನಾಗಿರುವುದಿಲ್ಲ, ಬದಲಾಗಿ ಅವನು ಕೋಪದಿಂದ ಕೂಡಿದ, ಮಾತ್ಸರ್ಯಕ್ಕೊಳಗಾಗಿರುವ ಹಾಗೂ ಯಾವುದೇ ಸಮರ್ಥನೆಗೆ ಕಿವಿಗೊಡದ ಪತಿಯಾಗಿರುತ್ತಾನೆ. ಆ ಸಂದರ್ಭದಲ್ಲಿ ರಾಮನು ರಾವಣನ ಮೇಲೆ ಆಕ್ರಮಣಮಾಡಿ ಅವನನ್ನು ಘಾಸಿಗೊಳಿಸುತ್ತಾನೆ.

ಇಲ್ಲಿಂದ ಮುಂದುವರೆದ ಬಡಿಗೇರರು ಈ ಘಟನೆಗೆ ಹೊಸದೇ ಆದ ತಿರುವನ್ನು ನೀಡುತ್ತಾರೆ - ಈ ಘಟನೆಯಿಂದ ಸೀತೆಯು ನಿರಾಶೆ ಮತ್ತು ದುಃಖದಿಂದ ಕುಸಿದು ಬೀಳುವುದರ ಬದಲಾಗಿ ಗಾಯಗೊಂಡ ಜೀವಿಯನ್ನು ಮೆಲ್ಲಗೆ ಎತ್ತಿಕೊಂಡು ಅದನ್ನು ತಾನೇ ಚಿತ್ರದ ಮೂಲಕ ಜನ್ಮ ನೀಡಿದ್ದರಿಂದ ಅದು ತನ್ನ ಮಗುವೆಂದು ತಿಳಿಸಿ ಒಬ್ಬಂಟಿಯಾಗಿ ತನ್ನ ಪತಿಯೊಡನೆ ವೀರಾವೇಶದಿಂದ ಹೋರಾಡುತ್ತಾಳೆ. ಬಡಿಗೇರರ ನಾಟಕದಲ್ಲಿ ಇದು ಒಂದು ಆಶ್ಚರ್ಯಕರವಾದ ಹಾಗೂ ಏಕೈಕ ತಿರುವು. ಅವರ ಪ್ರಕಾರ - ಈ ಕಥೆಯು ಅಸಹಾಯಕ ಹಾಗೂ ದುರ್ಬಲ ಹೆಣ್ಣಿನ ಕಥೆಯಾಗದೇ ಹೆಣ್ಣು ಆ ಸಂದರ್ಭದಲ್ಲಿ ಪ್ರತಿಭಟಿಸುವುದಲ್ಲದೇ ಆಕ್ರಮಣವನ್ನೂ ಮಾಡುವ ಸೀತೆಯಾಗುವಳು ಎಂಬುದೇ ಅವರ ಕಲ್ಪನೆ.

ಹೆಚ್ಚು ಹೆಚ್ಚು ಸೃಜನಾತ್ಮಕ ನಿರ್ದೇಶಕರುಗಳು ಹಳೆ ಪುರಾಣದ ಘಟನೆಗಳನ್ನು ಒಪ್ಪಿಕೊಳ್ಳದೇ ತಮ್ಮದೇ ಆದ ಕಲ್ಪನೆಗೆ ಆದ್ಯತೆ ಕೊಟ್ಟು ಹೊಸ ತಿರುವುಗಳನ್ನು ಸೃಷ್ಟಿಸುತ್ತಿರುವುದನ್ನು ನಾವು ಗಮನಿಸಬಹುದು.
ಮತ್ತೊಬ್ಬ ಸೃಜನಾತ್ಮಕ ನಿರ್ದೇಶಕ ಕೆ.ಎಸ್.ರಾಜೇಂದ್ರನ್ ರವರು ಪುರಾಣದ ಪಾತ್ರಗಳ ಅರ್ಥ ವಿವರಣೆಗಳನ್ನು ಯುವ ಪೀಳಿಗೆಯ ನಟರಿಗೆ  ಅದರಲ್ಲೂ ಮಹಿಳೆಯರಿಗೇ ಬಿಡುತ್ತೇನೆಂದು ತಿಳಿಸುತ್ತಾರೆ. ರಾಜೇಂದ್ರನ್ ರವರು ಕೆ.ಮದವನೆ ಯವರು ರಚಿಸಿರುವಮಾಹಾಭಾರತದ ಸ್ತ್ರೀಯರುಕೃತಿಯ ಆಧಾರಿತ ನಾಟಕದಲ್ಲಿ ಅಂಬಾ, ದ್ರೌಪದಿ, ಕುಂತಿ ಹಾಗೂ ಸತ್ಯವತಿಯರ ಜೀವನ ಚರಿತ್ರೆಯನ್ನು ತಮಿಳುನಾಡಿನ ಒಬ್ಬ ಯುವತಿಯ ಮರ್ಯಾದಾ ಕೊಲೆಗೆ ಜೋಡಿಸುತ್ತಾರೆ. ಈ ಪಾತ್ರಧಾರಿಗಳೆಲ್ಲರೂ ಸ್ತ್ರೀಯರ ಮೇಲಿನ ಪುರುಷರ ದಬ್ಬಾಳಿಕೆಯನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಅದರಲ್ಲೂ  ದ್ರೌಪದಿಯು ಸಂದರ್ಭಕ್ಕೆ ಬಲಿಪಶುವಾಗದೇ ಯುದ್ಧಕ್ಕೆ ತನ್ನ ಪತಿಯರನ್ನು ಪ್ರೇರೇಪಿಸುತ್ತಾಳೆ ಹಾಗೂ ಆಕ್ರಮಣಕಾರಿ ಮನೋಭಾವನೆಯನ್ನು ಅನೇಕ ಸಂದರ್ಭಗಳಲ್ಲಿ ಪ್ರದರ್ಶಿಸುತ್ತಾಳೆ. 

ಕನ್ನಡಾನುವಾದ - ಗುರುಪ್ರಸಾದ್ ಹಾಲ್ಕುರಿಕೆ
  
         

 


Comments

  1. Casino of the Sky
    The Sky Casino has 계룡 출장샵 been 당진 출장마사지 in operation since 1996. Since then, players have been able to enjoy their favourite 제주 출장안마 games,  경상남도 출장안마 Rating: 4 제천 출장안마 · ‎Review by Dr. John G.

    ReplyDelete

Post a Comment